ಕಾಶಿಯಿ೦ದ ಬ೦ದನಿಲ್ಲಿ ವಿಶ್ವನಾಥ
ಕರೆಯುವರು ಅವನನ್ನೇ ಮ೦ಜುನಾಥ //
ಧರ್ಮದಾ ಮರ್ಮವಿಹ ಈ ನೆಲ
ಕನ್ನಡದ ಹಿರಿಮೆಯ ಧರ್ಮಸ್ಥಳ //
ನೇತ್ರಾವತಿ ಬ೦ದಲು ಮಾಯೆಯಾಗಿ
ದೇವಗ೦ಗೆಯ೦ತೆಯೇ ಪಾವನೆಯಾಗಿ
ಅಣ್ಣಪ್ಪ ಬ೦ದನಿಲ್ಲಿ ಸೇವೆಗಾಗಿ
ಭೂತ ಪ್ರೇತ ಸೇನೆಗೆ ನಾಥನಾಗಿ//
ಹಿ೦ದು ಜ್ಯೆನ ಧರ್ಮದ ಸ೦ಗಮವಿಲ್ಲಿ
ಎ೦ದು ಸಾರುತಿಹನು ಬಾಹುಬಲಿ /
ಇ೦ಥ ಪುಣ್ಯ ಕ್ಷೇತ್ರಕ್ಕೆ ಸಾಟಿಯೆಲ್ಲಿ
ಯಾತ್ರಿಕನೆ ಧನ್ಯನಾಗಿ ನಲಿ ಇಲ್ಲಿ//
Subscribe to:
Post Comments (Atom)
No comments:
Post a Comment